AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಸಮಸ್ಯೆಗಳಿಗೆ ಸುರ್ಜೆವಾಲಾ ಸ್ಪಂದಿಸಿದ್ದಾರೆ, ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ್ದಾರೆ: ರಾಜು ಕಾಗೆ, ಶಾಸಕ

ನನ್ನ ಸಮಸ್ಯೆಗಳಿಗೆ ಸುರ್ಜೆವಾಲಾ ಸ್ಪಂದಿಸಿದ್ದಾರೆ, ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ್ದಾರೆ: ರಾಜು ಕಾಗೆ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 01, 2025 | 6:13 PM

Share

ಸ್ವಾಭಿಮಾನಕ್ಕಾಗಿ, ಆತ್ಮಸನ್ಮಾನಕ್ಕಾಗಿ ಮತ್ತು ತನ್ನ ಕ್ಷೇತ್ರದ ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ, ಈಗಿರುವ ವ್ಯವಸ್ಥೆ ಬದಲಾಗಬೇಕು, ಮಿನಿಸ್ಟ್ರುಗಳು ಶಾಸಕರೊಂದಿಗೆ ಗೌರವದಿಂದ ಮಾತಾಡಬೇಕು ಮತ್ತು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಬೇಕು, ವರ್ಷಗಟ್ಟಲೆ ಧೂಳು ಮೆತ್ತಿಕೊಂಡು ಬಿದ್ದಿರುವ ಫೈಲ್ ಗಳನ್ನು ಕ್ಲೀಯರ್ ಮಾಡಬೇಕು ಎಂದು ರಾಜು ಕಾಗೆ ಹೇಳಿದರು.

ಬೆಂಗಳೂರು ಜುಲೈ 1: ಬೆಳಗ್ಗೆ 11 ಗಂಟೆಗೆ ರಾಜು ಕಾಗೆ ಅವರೊಂದಿಗೆ ಮಾತಾಡಬೇಕಿದ್ದ ರಂದೀಪ್ ಸುರ್ಜೇವಾಲ (Randeep Surjewala) ಅಂತಿಮವಾಗಿ ಮಾತುಕತೆಗೆ ಕರೆದಿದ್ದು ಮಧ್ಯಾಹ್ನ 2.30 ಗಂಟೆಗೆ. ಎರಡು ದಿನಗಳಿಂದ ಮಾಧ್ಯಮದವರ ಜೊತೆ ತೋಡಿಕೊಂಡ ನೋವನ್ನೇ ಸುರ್ಜೇವಾಲಾ ಅವರಿಗೂ ಹೇಳಿದ್ದೇನೆ, ನನ್ನ ಸಮಸ್ಯೆಗಳನ್ನು ಅವರು ಗಮನವಿಟ್ಟು ಕೇಳಿದ್ದಾರೆ, ನಾನು ಹೇಳಿರುವುದನ್ನು ಎಲ್ಲರೊಂದಿಗೆ ಚರ್ಚಿಸಿ ಪರಿಹಾರ ಸೂಚಿಸುವುದಾಗಿ ಹೇಳಿದ್ದಾರೆ ಎಂದು ಕಾಗೆ ಹೇಳಿದರು. ಮುಂದೆ ಯಾವುದೇ ಸಮಸ್ಯೆ ಎದುರಾದರೂ ತನ್ನೊಂದಿಗೆ ಮಾತಾಡುವಂತೆ ಸುರ್ಜೆವಾಲಾ ಹೇಳಿದ್ದಾರೆ ಎಂದು ಕಾಗೆ ಹೇಳಿದರು.

ಇದನ್ನೂ ಓದಿ:   ನನಗೆ ಅಪಮಾನ ಮಾಡಿದ ಅಧಿಕಾರಿ ರಾಜೇಂದ್ರ ಕಠಾರಿಯ ವಿರುದ್ಧ ಸರ್ಕಾರ ಕ್ರಮ ಜರುಗಿಸಲೇ ಇಲ್ಲ: ರಾಜು ಕಾಗೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 01, 2025 06:11 PM
OSZAR »