ನನ್ನ ಸಮಸ್ಯೆಗಳಿಗೆ ಸುರ್ಜೆವಾಲಾ ಸ್ಪಂದಿಸಿದ್ದಾರೆ, ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ್ದಾರೆ: ರಾಜು ಕಾಗೆ, ಶಾಸಕ
ಸ್ವಾಭಿಮಾನಕ್ಕಾಗಿ, ಆತ್ಮಸನ್ಮಾನಕ್ಕಾಗಿ ಮತ್ತು ತನ್ನ ಕ್ಷೇತ್ರದ ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ, ಈಗಿರುವ ವ್ಯವಸ್ಥೆ ಬದಲಾಗಬೇಕು, ಮಿನಿಸ್ಟ್ರುಗಳು ಶಾಸಕರೊಂದಿಗೆ ಗೌರವದಿಂದ ಮಾತಾಡಬೇಕು ಮತ್ತು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಬೇಕು, ವರ್ಷಗಟ್ಟಲೆ ಧೂಳು ಮೆತ್ತಿಕೊಂಡು ಬಿದ್ದಿರುವ ಫೈಲ್ ಗಳನ್ನು ಕ್ಲೀಯರ್ ಮಾಡಬೇಕು ಎಂದು ರಾಜು ಕಾಗೆ ಹೇಳಿದರು.
ಬೆಂಗಳೂರು ಜುಲೈ 1: ಬೆಳಗ್ಗೆ 11 ಗಂಟೆಗೆ ರಾಜು ಕಾಗೆ ಅವರೊಂದಿಗೆ ಮಾತಾಡಬೇಕಿದ್ದ ರಂದೀಪ್ ಸುರ್ಜೇವಾಲ (Randeep Surjewala) ಅಂತಿಮವಾಗಿ ಮಾತುಕತೆಗೆ ಕರೆದಿದ್ದು ಮಧ್ಯಾಹ್ನ 2.30 ಗಂಟೆಗೆ. ಎರಡು ದಿನಗಳಿಂದ ಮಾಧ್ಯಮದವರ ಜೊತೆ ತೋಡಿಕೊಂಡ ನೋವನ್ನೇ ಸುರ್ಜೇವಾಲಾ ಅವರಿಗೂ ಹೇಳಿದ್ದೇನೆ, ನನ್ನ ಸಮಸ್ಯೆಗಳನ್ನು ಅವರು ಗಮನವಿಟ್ಟು ಕೇಳಿದ್ದಾರೆ, ನಾನು ಹೇಳಿರುವುದನ್ನು ಎಲ್ಲರೊಂದಿಗೆ ಚರ್ಚಿಸಿ ಪರಿಹಾರ ಸೂಚಿಸುವುದಾಗಿ ಹೇಳಿದ್ದಾರೆ ಎಂದು ಕಾಗೆ ಹೇಳಿದರು. ಮುಂದೆ ಯಾವುದೇ ಸಮಸ್ಯೆ ಎದುರಾದರೂ ತನ್ನೊಂದಿಗೆ ಮಾತಾಡುವಂತೆ ಸುರ್ಜೆವಾಲಾ ಹೇಳಿದ್ದಾರೆ ಎಂದು ಕಾಗೆ ಹೇಳಿದರು.
ಇದನ್ನೂ ಓದಿ: ನನಗೆ ಅಪಮಾನ ಮಾಡಿದ ಅಧಿಕಾರಿ ರಾಜೇಂದ್ರ ಕಠಾರಿಯ ವಿರುದ್ಧ ಸರ್ಕಾರ ಕ್ರಮ ಜರುಗಿಸಲೇ ಇಲ್ಲ: ರಾಜು ಕಾಗೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Jul 01, 2025 06:11 PM
Latest Videos

ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್

ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ

ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ

ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
